Tuesday, July 28, 2009

ನಮಂತಿ ಬುಧಾ ಜನಾ:

ಅಕೃತ್ವಾ ಪರಸಂತಾಪಂ ಅಗತ್ವಾ ಖಲ ನಮ್ರತಾಮ್|

ಅನುತ್ಸೃಜ್ಯಸತಾಂ ವರ್ತ್ಮ| ಯತ್ ಸ್ವಲ್ಪ ಮಿತದ್ಬಹು||

ಬೇರೆಯವರಿಗೆ ನೋವುಂಟುಮಾಡದೆ,ದುಷ್ಟರಿಗೆ ಬಗ್ಗದೆ,ಸಜ್ಜನರು ತುಳಿದ ಮಾರ್ಗವನ್ನು ಬಿಡದೆ, ಸ್ವಲ್ಪವನ್ನೇ ಮಾಡಿದರೂ ಅದು ಮಹತ್ವದ್ದೇ ಸರಿ.

ದುರ್ಜನೇನ ಸಮಂ ಸಖ್ಯಂ ವೈರಂ ಚಾಪಿ ನಕಾರಯೇತ್| ಉಷ್ಣೋ ದಹತಿ ಚಾಂಗಾರ: ಶೀತ: ಕೃಷ್ಣಾಯತೇ ಕರಂ||

ದುರ್ಜನರೊಂದಿಗೆ ಸ್ನೇಹವನ್ನಾಗಲೀ ವೈರವನ್ನಾಗಲೀ ಮಾಡಕೂಡದು.ಉರಿವ ಕೆಂಡ ಕೈಸುಟ್ಟರೆ, ತಣ್ಣಗಿನ ಇದ್ದಿಲು ಕೈಯನ್ನು ಕಪ್ಪು ಮಾಡುತ್ತದೆ.

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ| ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ||

ಸ್ವಂತ ಬುದ್ಧಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇ ಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ?

ನಮಂತಿ ಫಲಿತಾ ವೃಕ್ಷಾ:| ನಮಂತಿ ಬುಧಾ ಜನಾ: | ಶುಷ್ಕ ಕಾಷ್ಠಾನಿ ಮೂರ್ಖಾಶ್ಚ| ಭಿದ್ಯಂತೇನ ನಮಂತಿಚ||

ಹಣ್ಣು ಬಿಟ್ಟ ಮರಗಳು ಬಾಗುತ್ತವೆ.ವಿದ್ವಾಂಸರಾದ ಜನರು ವಿನಯದಿಂದ ಬಾಗುತ್ತಾರೆ. ಒಣಕಡ್ಡಿಗಳು ಮುರಿದುಹೋಗುತ್ತವೆ. ಬಾಗುವುದಿಲ್ಲ. ಅಂತೆಯೇ ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ.

No comments: