Monday, July 13, 2009

ಮನದಾಳದ ಮಾತು

ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ.................. ಈಗ ತಾವು ರಾಜಕಾರಣಿ, ಸಾಹಿತಿ,ಇತ್ಯಾದಿ ಎಂಬುದನ್ನು ಮರೆತು ತಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.... ೧] ತಮ್ಮ ಕುಟುಂಬವು ಪರಿಪೂರ್ಣ ಆರೋಗ್ಯವಾಗಿ ನೆಮ್ಮದಿಯಿಂದ ಇದೆಯೇ? ೨] ಮಕ್ಕಳೊಡನೆ ಸಂತಸವಾಗಿದ್ದೇವೆಯೇ? ೩] ತಮ್ಮ ಮಕ್ಕಳು ನಿಜವಾಗಿಯೂ ಋಜುಮಾರ್ಗದಲ್ಲಿ ಸಾಗುತ್ತಿದ್ದಾರೆಯೇ? ನಮ್ಮ ಆತ್ಮಸಾಕ್ಷಿ ಏನು ನುಡಿದೀತು? ಎಲ್ಲವೂ ಉತ್ತಮ ವಾಗಿದೆ, ಎಂಬುವುದಾದರೆ ಈ ಬರಹವನ್ನು ಮುಂದೆ ಓದುವ ಅಗತ್ಯವಿಲ್ಲ. ಇಲ್ಲವೆಂದಾದರೆ........ ೧] ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಮ್ಮ ಸ್ಥಿತಿ ಹೀಗೇಕೆ? ೨] ನಮ್ಮ ಮೂಲ ಸಂಸ್ಕೃತಿ-ಪರಂಪರೆಗಳನ್ನು ಮರೆಯುತ್ತಾ ಬಂದ ಪರಿಣಾಮವೇ? ೩]ಆಧುನಿಕ ಶಿಕ್ಷಣದ ಅವಾಂತರವೇ? ೪] ವೈಜ್ಞಾನಿಕ ಅನ್ವೇಷಣೆಗಳ ಅತಿ ಅನುಭೋಗದ ಕಾಣಿಕೆಯೇ? ಹೌದೆಂದಾದರೆ ಪರಿಹಾರವೇನು? ಎಲ್ಲರೂ ಚಿಂತನ-ಮಂಥನ ನಡೆಸೋಣ. ಎಲ್ಲರ ಮನದಾಳದ ಮಾತುಗಳಿಗೆ ಅಕ್ಷರವನ್ನು ಕೊಡಿ.ಸ್ನೇಹ ಮಿಲನದಲ್ಲಿ ನಾವುಗಳು ಸೇರಿದಾಗ ಈ ಚಿಂತನೆಗಾಗಿ ಒಂದು ಗಂಟೆ ಅವಧಿಯನ್ನಾದರೂ ಮೀಸಲಿರಿಸಿ, ಬೆಂಗಳೂರಿನ ಯಾರಾದರೂ ಚಿಂತಕರನ್ನು ಕರೆಸಿ ಅವರು ನಮ್ಮೆಲ್ಲರ ಮನದಾಳದ ಮಾತುಗಳನ್ನು ಕ್ರೂಢೀಕರಿಸಿದರೆ ಒಂದು ಸೂತ್ರ ಹೊರಬಂದೀತು. ನೆನಪಿರಲಿ: ಒಂದರೆಗಳಿಗೆ ನಮ್ಮ ಪೂರ್ವಾಗ್ರಹ ಬದಿಗಿರಲಿ. ನಾವು ಮಕ್ಕಳಾಗೋಣ.ಮೆಚ್ಚುಗೆಗಾಗಿಯೂ ಬರೆಯುವುದು ಬೇಡ, ಚುಚ್ಚುವುದಂತೂ ಬೇಡವೇ ಬೇಡ. ನಮ್ಮ ಮಾತು ಬಿಚ್ಚುಮನಸ್ಸಿನಿಂದ ಮಕ್ಕಳ ತೊದಲು ಮಾತಿನಂತಿದ್ದರೂ ಚೆನ್ನ. [ಈ ವಿಚಾರದಲ್ಲಿ ಚಿಂತನ- ಮಂಥನ ನಡೆದರೆ ಒಳ್ಳೆಯದು ಎಂಬುದು ನನ್ನ ಅಭಿಮತವಷ್ಟೆ. ಆಗ್ರಹವಲ್ಲ] ಮನವಿ:- ಈ ಚುಟುಕು ಬರಹ ಚೆನ್ನಾಗಿದೆ,ಇತ್ಯಾದಿ ಮಾತುಗಳ ಬದಲು " ನಮ್ಮ ಸಮಾಜವು ಆರೋಗ್ಯಪೂರ್ಣ ವಾಗಬೇಕೆಂದರೆ ದಾರಿ ಯಾವುದು? ನಿಮ್ಮ ಮಾತಿನಲ್ಲಿ ತಿಳಿಸಿ

No comments: